ಹಸುಗಳನ್ನು ಕಾವಲು ಕಾಯಲು ಮಲಗಿದ್ದ ವ್ಯಕ್ತಿಗಳ ಮೇಲೆ ಬುಲೋರೋ ವಾಹನ ಹರಿದು ಸಾವು  

ಹಸುಗಳನ್ನು ಕಾವಲು ಕಾಯಲು ಮಲಗಿದ್ದ ವ್ಯಕ್ತಿಗಳ ಮೇಲೆ ಬುಲೋರೋ ವಾಹನ ಹರಿದು ಸಾವು  

ಹಸುಗಳನ್ನು ಕಾವಲು ಕಾಯಲು ಮಲಗಿದ್ದ ವ್ಯಕ್ತಿಗಳ ಮೇಲೆ ಬುಲೋರೋ ವಾಹನ ಹರಿದು ಸಾವು  

ಹಸುಗಳನ್ನು ಕಾವಲು ಕಾಯಲು ಮಲಗಿದ್ದ ವ್ಯಕ್ತಿಗಳ ಮೇಲೆ ಬುಲೋರೋ ವಾಹನ ಹರಿದು ಒಬ್ಬ ಸಾವು ಮತ್ತೊರ್ವನಿಗೆ ಕಾಲು ಮುರಿತ ಆದ ಘಟನೆ ಚೇಳೂರು ವ್ಯಾಪ್ತಿಯಲ್ಲಿ ಬೆಳಗಿನ ಜಾವ ನಡೆದಿದೆ. ಆರಿಫುಲ್ಲಾ ಸಾವಿಗೀಡಾದ ವ್ಯಕ್ತಿ, ನರಸಿಂಹಪ್ಪ ಕಾಲು ಮುರಿದ ವ್ಯಕ್ತಿ ಎಂದು ತಿಳಿದು ಬಂದಿದೆ. ರಾತ್ರಿ ಸೀಮೆ ಹಸು ಮರಿ ಹಾಕುತ್ತೆ ಎಂದು ಇಬ್ಬರು ಹಸುವಿಗೆ ಕಾವಲು ಕಾಯಲು ಮನೆಯ ಮುಂದೆ ಮಲಗಿದ್ದರು. ಈ ಸಮಯದಲ್ಲಿ ಬೆಳಗಿನ ಜಾವ ಸುಮಾರು 2 ಘಂಟೆಯಲ್ಲಿ ಬಾಳೆ ಕಾಯಿ ತುಂಬಿಕೊಂಡು ಹೋಗುತ್ತಿದ್ದ ಬುಲೋರೋ ವಾಹನ ಇಬ್ಬರ ಮೇಲೆ ಹರಿದು ಈ ಘಟನೆ ನಡೆದಿದೆ. ನಂತರ ಗ್ರಾಮಸ್ಥರು ಘಟನೆಯ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಇಬ್ಬರನ್ನ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.